Public App Logo
Jansamasya
Rahulgandhi
Haryana
Uttarpradesh
Jdu
Sambalpur
Cyclone
Bareilly
Bcci
Agra
Breaking
Aimim
Railway
Bsf
Fatehpur
Meerut
Raebareli
Rain
Kashmir
���ाकिस्तान
Trending
���िवाद
Bengal
���खिलेश
���ारतीय
���ोगी_आदित्यनाथ
Faridabad
Arvindkejriwal
Jajpur
���ोधपुर

ಶಿರಸಿ: ಆಡಳಿತ ಸೌಧದಲ್ಲಿ ಶಾಸಕ ಹೆಬ್ಬಾರ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ : ಮಳೆ ಅನಾಹುತಕ್ಕೆ ಮುಂಜಾಗ್ರತೆ ವಹಿಸಲು ಸೂಚನೆ

Sirsi, Uttara Kannada | Jul 4, 2025
ಶಿರಸಿ : ಶಾಸಕ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ನಗರದ ಆಡಳಿತ ಸೌಧದಲ್ಲಿ ಬನವಾಸಿ ಹೋಬಳಿ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆ (ಕೆ.ಡಿ.ಪಿ) ನಡೆಸಿದರು. ಸಭೆಯಲ್ಲಿ ಶಾಸಕರು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಬನವಾಸಿ ಹೋಬಳಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಕುರಿತು ವಿವರವಾದ ಮಾಹಿತಿಯನ್ನು ಪಡೆದುಕೊಂಡರು. ಪ್ರತಿ ಯೋಜನೆಯ ನಿರ್ವಹಣೆ, ಗತಿಸ್ಥಿತಿ ಮತ್ತು ಪೂರ್ಣಗೊಳಿಸುವ ಅವಧಿ ಕುರಿತು ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಉಂಟಾಗಬಹುದಾದ ಯಾವುದೇ ಅಹಿತಕರ ಪರಿಸ್ಥಿತಿಗಳನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸದರು.