ದಾಂಡೇಲಿ : ತಾಲೂಕಿನ ಅಂಬಿಕಾನಗರ ರಸ್ತೆಯ ಕುಳಗಿಯ ಹತ್ತಿರ ರಸ್ತೆ ಬದಿಯಲ್ಲಿ ಚಿರತೆಯೆಂದು ಪ್ರತ್ಯಕ್ಷವಾದ ಘಟನೆ ಇಂದು ಶುಕ್ರವಾರ ರಾತ್ರಿ 8:30 ಗಂಟೆ ಸುಮಾರಿಗೆ ನಡೆದಿದೆ. ಕುಳಗಿಯಲ್ಲಿರುವ ಟಿ.ಎಸ್.ಬಾಲಮಣಿಯವರ ಮನೆಯ ಹತ್ತಿರ ಚಿರತೆ ರಸ್ತೆ ಬದಿಯಲ್ಲಿರುವುದನ್ನು ಕಂಡುಬಂದಿದೆ. ರಸ್ತೆ ಬದಿಯಲ್ಲಿ ಕೂತಿದ್ದ ಚಿರತೆಯನ್ನು ನೋಡಿದ ಅಂಬಿಕಾನಗರದಿಂದ ದಾಂಡೇಲಿಗೆ ಬರುತ್ತಿದ್ದ ಪ್ರಯಾಣಿಕರೊರ್ವರು ತಮ್ಮ ಮೊಬೈಲ್ ಕ್ಯಾಮಾರದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಕುಳಗಿ ಭಾಗದ ಜನತೆ ಬಹಳಷ್ಟು ಮುನ್ನೆಚ್ಚರಿಕೆಯನ್ನು ವಹಿಸಬೇಕಾಗಿದೆ.