11 ಕೆ.ವಿ ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿ: ಗರುಡಕೆಂಪನಹಳ್ಳಿಯಲ್ಲಿ ಘಟನೆ ಬೂದಿಕೋಟೆ : ಹೋಬಳಿಯ ಯಳೆಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಡುಕೆಂಪನಹಳ್ಳಿ ಗ್ರಾಮದ ರೈತ ಗಣೇಶ್ ರೆಡ್ಡಿ ಎಂಬುವವರು ತಮ್ಮ ತೋಟದ ಬಳಿ ವಿದ್ಯುತ್ ಪರಿವರ್ತಕ ಘಟಕಕ್ಕೆ ಫ್ಯೂಸ್ ಅಳವಡಿಸಲು ಹೋದಾಗ 11 ಕೆ.ವಿ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಸುಟ್ಟು ಕರಕಲಾಗಿರುವ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಪರಿವರ್ತಕ ಘಟಕದಲ್ಲಿ ಫ್ಯೂಸ್ ಬದಲಾಯಿಸಲು ಕಾಮಸಮುದ್ರ ಬೆಸ್ಕಾಂ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು ಸಿಬ್ಬಂದಿ ಬಾರದ ಕಾರಣ ಗಣೇಶ್ ರೆಡ್ಡಿ ಬೀನ್ ರಾಮರೆಡ್ಡಿ ಎಂಬ ರೈತ ವಿದ್ಯುತ್ ಕಂಬದಲ್ಲಿ ಸುಟ್ಟು ಕರಕಲಾಗಿರುವ ಘಟನೆ ಗುರುವಾರ ಮಧ್ಯಾಹ್ನ 3 ಗಂಟೆಯ