ಲಿಂಗಸೂರು: ಲಿಂಗಸುಗೂರು : ಶಾಸಕರು ಕಾಮಗಾರಿ ಹಣ ಕೊಡದೆ ಗೊಳಾಡಿಸುತ್ತಿರುವ ಆರೋಪ
ಎನ್.ಡಿ.ವಡ್ಡರ ಕಂಪನಿಗೆ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಹಾಗೂ ದುರಸ್ತಿ ಕಾಮಗಾರಿ ಉಪಗುತ್ತಿಗೆ ನೀಡಿ ಕಾಮಗಾರಿ ಮುಗಿದ ಮೇಲೆ ಹಣ ಕೊಡದೆ ಗೊಳಾಡಿಸುತ್ತಿರುವ ಆರೋಪಗುತ್ತಿಗೆದಾರರು ಮಾಡುತ್ತಿದ್ದಾರೆ. ಎನ್.ಡಿ.ವಡ್ಡರ ಕಂಪನಿಯೊಂದಿಗೆ ದೇವದುರ್ಗದ ತುಕರಾಮ ಜಿನ್ನಾಪುರ ಹೆಸರಿನಲ್ಲಿ ಉಪಗುತ್ತಿಗೆ ಪಡೆದು ಒಪ್ಪಂದಂತೆ 17ನೇ ವಿತರಣಾ ನಾಲೆ ಅಡಿಯಲ್ಲಿ ಒಟ್ಟು 13.5 ಕಿ.ಮೀ ಕಾಮಗಾರಿ ಮಾಡಲಾಗಿದ್ದು ಅದರ ಬಿಲ್ 4.87 ಕೋಟಿ ಆಗಿದೆ. ಆದರೆ ಆರು ತಿಂಗಳು ಕಳೆದ ನಂತರ ನಾನಾ ಸಬೂಬು ಹೇಳುತ್ತಿದ್ದಾರೆ, ಬಿಲ್ ಪಾವತಿ ಮಾಡುತ್ತಿಲ್ಲ ಎಂದು ಗುತ್ತಿಗೆದಾರರು ಅಸಮಾಧಾನ ಹೊರಹಾಕುತ್ತಿದ್ದಾರೆ.