ಚಳ್ಳಕೆರೆ ತಹಶೀಲ್ದಾರ ಕಚೇರಿಯ ಮುಂಭಾಗ ಪ್ರತಿಭಟನೆ ಮಾಡುವ ರೈತರಿಗೆ ಬೇರೆ ಕಡೆ ಪ್ರತಿಭಟನೆಗೆ ಅವಕಾಶ ನೀಡಿದ್ದನ್ನ ವಿರೋಧಿಸಿ, ರೈತರು ಚಳ್ಳಕರೆ ತಹಶೀಲ್ದಾರ ರೆಹಮಾನ್ ಪಾಷಾರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ರೈತರು ದೇಶದ ಅನ್ನದಾತರು. ಅನ್ಯಾಯಕ್ಕೆ ಒಳಗಾದ್ರೆ ಪ್ರತಿಭಟನೆ ಮಾಡಲು ತಹಶೀಲ್ದಾರ ಕಚೇರಿ ಮುಂಭಾಗ ಜಾಗ ಇಲ್ಲ ಅಂದ್ರೆ ಹೇಗೆ..? ಕಚೇರಿ ಮುಂಭಾಗ ಅದೆಷ್ಟೋ ಅಕ್ರಮ ಅಂಗಡಿಗಳನ್ನು ಹಾಕಿದ್ದಾರೆ. ಅವನ್ನು ತೆರವು ಮಾಡಿ. ಅದನ್ನು ಬಿಟ್ಟು ರೈತರ ಹೋರಾಟ ಹತ್ತಿಕ್ಕಲು ಇಂಥ ತಂತ್ರ ಮಾಡುವುದು ಸರಿಯಲ್ಲ ಅಂತಾ ರೈತ ಮುಖಂಡರು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡದ್ರು.