ಕಲಬುರಗಿ: ಉದನೂರ- ನಂದಿಕೂರ ನಡುವಿನ ರಸ್ತೆ ಬದಿ ಇಸ್ಪಿಟ್ ಆಡುತ್ತಿದ್ದ ಏಳು ಜನರ ಬಂಧನ
ಉದನೂರ ಗ್ರಾಮದಿಂದ ನಂದಿಕೂರ ಗ್ರಾಮಕ್ಕೆ ಹೋಗುವ ಸಾರ್ವಜನಿಕ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಜೂಜಾಡುತ್ತಿರಜವ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಬಿ.ಸಾಗರ ಹಾಗೂ ಸಿಬ್ಬಂದಿ ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ. ಶಿವಶರಣಪ್ಪ ಯಮಂಟಿ, ಶಿವರಾಜ ಬಿರಾದಾರ, ಮಹಾಂತಪ್ಪ ಅಲ್ಲಾಪೂರ, ಲಕ್ಷ್ಮೀಕಾಂತ ಧಂಗಾಪೂರ, ಮಲ್ಲಿಕಾರ್ಜುನ ಕಪನೂರ, ಶರಣಪ್ಪ ಸಿರಸಗಿ, ಜೈಭೀಮ ಕೊರಳ್ಳಿ ಎಂಬುವವರನ್ನು ಬಂಧಿಸಿ 17,320 ರೂ.ನಗದು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬುಧವಾರ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ..