ಶಿರಸಿ: ಬನವಾಸಿ ರಸ್ತೆಯ ಕೆರೆಕೊಪ್ಪ ಗ್ರಾಮದ ಮನೆಯೊಂದರ ಬಾವಿಗೆ ಬಿದ್ದ ಚಿರತೆ
ಶಿರಸಿ : ತಾಕೂಕಿನ ಬನವಾಸಿ ರಸ್ತೆಯ ಕೆರೆಕೊಪ್ಪ ಗ್ರಾಮದ ಸುರೇಶ ಹೆಗಡೆ ಎಂಬುವವರ ಮನೆಯ ಬಾವಿಗೆ ಭಾನುವಾರ ನಸುಕಿನ ವೇಳೆ ಚಿರತೆಯೊಂದು ಬಿದ್ದಿರುವ ಘಟನೆ ನಡೆದಿದೆ. ಈ ಬಗ್ಗೆ ಭಾನುವಾರ ಬೆಳಿಗ್ಗೆ 6:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಬಾವಿಯೊಳಗಡೆ ಬಿದ್ದ ಚಿರತೆ ಮೇಲೆ ಬರಲಾಗದೆ ಒದ್ದಾಡಿದೆ. ಚಿರತೆಯ ರಕ್ಷಣೆಗಾಗಿ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.