ಶಿರಹಟ್ಟಿ: ಕೋಗನೂರು ಗ್ರಾಮಸ್ಥರಿಂದ ಹುತಾತ್ಮ ತ್ರಿಮೂರ್ತಿಗಳ ಬಲಿದಾನ ದಿನ ಆಚರಣೆ
ಶಿರಹಟ್ಟಿ: ತಾಲೂಕಿನ ಕೋಗನೂರ ಗ್ರಾಮದಲ್ಲಿ ಹುತಾತ್ಮ ತ್ರಿಮೂರ್ತಿಗಳ ಬಲಿದಾನ ದಿನವನ್ನು ಆಚರಿಸಲಾಯಿತು. ಹುತಾತ್ಮರಿಗೆ ಗೌರವ ಸಲ್ಲಿಸುವುದಕ್ಕೆ ಅಮರ ಜ್ಯೋತಿಯನ್ನು ಗ್ರಾಮದ ಹಿರಿಯರಾದ ವೀರಯ್ಯ ಹಿರೇಮಠ ಹಾಗೂ ಮಡಿವಾಳಪ್ಪ ತಿರಕಪ್ಪನವರ ಅವರು ಸಹಕುಟುಂಬದವರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ೧೧ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಮೂಲಕ ವೀರ ಸ್ವಾತಂತ್ರ್ಯ ಹೋರಾಟಗಾರಾದ ಗೋಣೆಪ್ಪ ಕಮತರ ಇವರ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಹುತಾತ್ಮರ ವರ್ತುಲದಲ್ಲಿ ಸ್ವಾತಂತ್ರ ಹೋರಾಟಗಾರರ ವಂಶಸ್ಥರು ಗ್ರಾಮದ ಗುರುಹಿರಿಯರು, ಮುಖಂಡರು, ಯುವಕರು ಎಲ್ಲರೂ ಸೇರಿಕೊಂಡು ಹುತಾತ್ಮ ತ್ರೀಯರ ಮೂರ್ತಿಗಳನ್ನು ಪೂಜೆ ಮಾಡಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.