ಶಿವಮೊಗ್ಗ: ಸಿರಿಯೂರು ಕ್ಯಾಂಪ್ನಲ್ಲಿ ಬಂಜಾರ ಸಮಾಜದ 16ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಶಾಸಕಿ ಶಾರದಾ ಪೂರ್ಯಾನಾಯ್ಕ್ ಚಾಲನೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿರಿಯೂರು ಕ್ಯಾಂಪ್ನಲ್ಲಿ ಭಾನುವಾರ ಭದ್ರಾವತಿ ತಾಲೂಕು ಬಂಜಾರ ಸಮುದಾಯದ ವತಿಯಿಂದ 16ನೇ ಅದ್ದೂರಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕಿಯಾದಂತಹ ಶಾರದಾ ಪೂರ್ಯ ನಾಯ್ಕ್ ಅವರು ಉದ್ಘಾಟಿಸಿದರು ಬಳಿಕ ಪ್ರತಿಭಾ ಪುರಸ್ಕಾರ ಹಿನ್ನೆಲೆ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.