ಹುಬ್ಬಳ್ಳಿ: ಆಟೋದಲ್ಲಿ ಪ್ರಯಾಣಿಕರೊಬ್ಬರು ಬ್ಯಾಗ್ ಮರೆತು ಹೋಗಿದ್ದರು. ಅದನ್ನು ನೋಡಿದ ಆಟೋ ಚಾಲಕ, ಪೊಲೀಸರಿಗೆ ತಲುಪಿಸಿ ಮಾಲೀಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಗಬ್ಬೂರ ಬೈಪಾಸ್ ನ ಜಗಜ್ಯೋತಿ ಬಸವೇಶ್ವರ ಆಟೋರಿಕ್ಷಾ ನಿಲ್ದಾಣ ಆಟೋ ಚಾಲಕ ಮಂಜುನಾಥ ಎಂಬುವವರ ಆಟೋವನ್ನು ಹತ್ತಿ ಹೊಸ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು. ಆಗ ಅವಸರದಿಂದ ಇಳಿದು ಒಂದು ಬ್ಯಾಗನ್ನು ಮರೆತು ಹೋಗಿದ್ದರು. ಆಟೋ ಚಾಲಕ ಮಂಜುನಾಥ್ ಅದನ್ನು ಗಮನಿಸಿ ಆಟೋ ಚಾಲಕರ ಸಂಘಕ್ಕೆ ತಿಳಿಸಿ, ಗೋಕುಲ ರೋಡ್ ಪೊಲೀಸರ ಮೂಲಕ ಮಾಲೀಕರಿಗೆ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.