ಹಳಿಯಾಳ : ಕಬ್ಬು ಬೆಳೆಗೆ ರೂ.3,363/- ದರ ನಿಗಧಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘ ನಡೆಸುತ್ತಿರುವ ಹೋರಾಟ ಸೋಮವಾರ 5ನೇ ದಿನಕ್ಕೆ ಮುಂದುವರಿದಿದೆ. ಸೋಮವಾರ ಹಳಿಯಾಳ - ಯಲ್ಲಾಪುರ ರಾಜ್ಯ ಹೆದ್ದಾರಿ ತಡೆದು ಕಬ್ಬು ಬೆಳೆಗಾರರು ಪ್ರತಿಭಟನೆಯನ್ನು ನಡೆಸಿದರು ಈ ಪ್ರತಿಭಟನೆ ಸೋಮವಾರ ಸಂಜೆ 5.30 ಗಂಟೆ ಸುಮಾರಿಗೆ ಸಂಪನ್ನಗೊಂಡಿತು. ಅಂತಿಮವಾಗಿ ದರ ನಿಗಧಿಯ ವಿಚಾರವಾಗಿ ಜಿಲ್ಲಾಧಿಕಾರಿ ಹಾಗೂ ರೈತರ ಜೊತೆ ಶೀಘ್ರದಲ್ಲೇ ಸಭೆ ನಡೆಸುವುದಾಗಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಭರವಸೆ ನೀಡಿದರು.