ಕಾರವಾರ: ಹದಗೆಟ್ಟ ಹಬ್ಬುವಾಡಾ ರಸ್ತೆ ನಗರದಲ್ಲಿ ರಿಕ್ಷಾ ಚಾಲಕರಿಂದ ಹಠಾತ್ ಪ್ರತಿಭಟನೆ
ನಗರದ ಹಬ್ಬುವಾಡಾ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ಆಕ್ರೋಶ ವ್ಯಕ್ತಪಡಿಸಿ ನಗರದ ಎಪಿಎಂಸಿ ಬಳಿ ರಿಕ್ಷಾ ಚಾಲಕರು, ಕರ್ನಾಟಕ ರಕ್ಷಟ ಗಜಸೇನೆ ವೇದಿಕೆ ಪದಾಧಿಕಾರಿಗಳು ಬುಧವಾರ ಮಧ್ಯಾಹ್ನ 1 ಕ್ಕೆ ಹಠಾತ್ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಪೌರಾಯ್ತ ಜಗದೀಶ್ ಹುಲಿಗೆಜ್ಜಿ ಅವರು ಮಳೆಗಾಲ ಆಗಿದ್ದರಿಂದ ರಸ್ತೆ ಕಾಮಗಾರಿ ಕೈಗೊಂಡಿಲ್ಲ. ಮಳೆ ಕಡಿಮೆಯಾದ ಬಳಿಕ ಶೀಘ್ರವೇ ರಸ್ತೆ ಕಾಮಗಾರಿ ಭರವಸೆ ನೀಡಿದರು.