ಯಳಂದೂರು: ಪಟ್ಟಣದಲ್ಲಿ ಮೂತ್ರ ವಿಸರ್ಜನೆಗೆ ಹೋಗಬೇಕೆಂದ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಹಿಗ್ಗಾ ಮುಗ್ಗಾ ಥಳಿತ
ಮೂತ್ರ ವಿಸರ್ಜನೆಗೆ ಹೋಗಬೇಕೆಂದ ವಿದ್ಯಾರ್ಥಿಗೆ ಶಾಲಾ ಶಿಕ್ಷಕಿಯೊಬ್ಬರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ. ಯಳಂದೂರಿನ ಎಸ್.ಡಿ.ವಿ.ಎಸ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿ ಗುರುಪ್ರಸಾದ್ ಹಲ್ಲೆಗೊಳಗಾದ ಬಾಲಕನಾಗಿದ್ದು ಶಿಕ್ಷಕಿ ಭಾನುಮತಿ ಎಂಬವರು ಮನಬಂದಂತೆ ಥಳಿಸಿದ್ದಾರೆ.ಇಂದು ತರಗತಿ ವೇಳೆ ಮೂತ್ರ ವಿಸರ್ಜನೆ ಹೋಗ್ಬೇಕೆಂದು ಗುರುಪ್ರಸಾದ್ 2-3 ಕೇಳಿದಕ್ಕೆ ಮನಸೋ ಇಚ್ಛೆ ಭಾನುಮತಿ ಥಳಿಸಿದ್ದು, ವಿದ್ಯಾರ್ಥಿಯ ಕೈ, ಭುಜ ಹಾಗೂ ಪುಷ್ಠ ಭಾಗಕ್ಕೆ ಬರೆ ಬಂದು ಊದಿಕೊಂಡಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಯಳಂದೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ.