ಬೆಂಗಳೂರಿನ ಹುಳಿಮಾವು ಸರಸ್ವತಿಪುರಂನಲ್ಲಿ ಸಂಜೆ 3:30ರ ಸುಮಾರಿಗೆ ರಸ್ತೆ ಗುಂಡಿಯಿಂದಾಗಿ ಗೋಕಾಕ್ ಮೂಲದ ಶಾಂತಮ್ಮ (45) ಎಂಬುವರು ಮೃತಪಟ್ಟಿದ್ದಾರೆ. ಸ್ನೇಹಿತೆಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ, ಗುಂಡಿಗೆ ಬೈಕ್ನ ಚಕ್ರ ಬಿದ್ದು, ಶಾಂತಮ್ಮ ಕೆಳಗೆ ಬಿದ್ದಿದ್ದಾರೆ. ನಂತರ ಬೈಕ್ ನಿಯಂತ್ರಣ ತಪ್ಪಿ ಟಿಪ್ಪರ್ಗೆ ಡಿಕ್ಕಿ ಹೊಡೆದ ಪರಿಣಾಮ, ಶಾಂತಮ್ಮ ಅವರ ಮೇಲೆ ಟಿಪ್ಪರ್ನ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಮ್ಮನಹಳ್ಳಿಯಲ್ಲಿ ಮಗನೊಂದಿಗೆ ವಾಸವಿದ್ದ ಶಾಂತಮ್ಮ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.