ರಾಯಚೂರು ನಗರದ ಶ್ರೀ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ, ಜಗದ್ಗುರು ರಮಾನಂದಚಾರ್ಯ ನರೇಂದ್ರ ಚಾರ್ಯ ಜಿ ಅವರ ಪಾದಕ್ಕೆ ದರ್ಶನ ಕಾರ್ಯಕ್ರಮದಲ್ಲಿ, ರಾಯಚೂರು ನಗರದ ಹಲವು ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಯಿತು. ಕಾಂಗ್ರೆಸು ಯುವ ಮುಖಂಡ ರವಿ ಬೋಸರಾಜ್ ಅವರ ನೇತೃತ್ವದಲ್ಲಿ, ಈ ಒಂದು ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಈ ವೇಳೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.