ಚಾಮರಾಜನಗರದಲ್ಲಿ ಡಿಸಿಎಫ್ ಪ್ರಭಾಕರನ್ ಮಾತನಾಡಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ ದಿನನಿತ್ಯ ಒಂದಲ್ಲ ಒಂದು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೇಸತ್ತು ಹೋಗೀದ್ದಾರೆ ಬೆಳೆ ನಷ್ಟ ಅಲ್ಲದೇ ರೈತರ ಪ್ರಾಣ ಕೂಡ ಹೋಗ್ತಿದೆ. ಏನಾದರೂ ಮಾಡಿ ವನ್ಯಪ್ರಾಣಿಗಳಿಂದ ರಕ್ಷಿಸಿ ಎಂದು ಜನರಂತು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆ ಅರಣ್ಯ ಇಲಾಖೆ ಕಾಡುಪ್ರಾಣಿಗಳ ಮೇಲೆ ನಿಗಾ ವಹಿಸುವ ಸಲುವಾಗಿ ಕಾಡಿನಲ್ಲಿ ಥರ್ಮಲ್ ಕ್ಯಾಮೆರಾ ಲೈವ್ ಕ್ಯಾಮೆರಾ ಹಾಗೂ ಥರ್ಮಲ್ ಡ್ರೋನ್ ಸೇರಿದಂತೆ ಅಳವಡಿಕೆ ಮಾಡುವ ಚಿಂತನೆ ಮಾಡಲಾಗಿದೆ ಎಂದರು