ಕುಂದಗೋಳ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ: ಕುಂದಗೋಳ ಪಟ್ಟಣದಲ್ಲಿ ಶಾಸಕ ಎಂ.ಆರ್ ಪಾಟೀಲ
ಕೇಂದ್ರ ಸರ್ಕಾರದ ಬೆಂಬಲ ಯೋಜನೆಯಡಿ ಖರೀದಿ ಕೇಂದ್ರಗಳು ಆರಂಭವಾಗಿವೆ ಎಂದು ಶಾಸಕ ಎಂ.ಆರ್.ಪಾಟೀಲ್ ಹೇಳಿದರು. ಬುಧವಾರ ಕುಂದಗೋಳ ಪಟ್ಟಣದಲ್ಲಿ ಎಪಿಎಂಸಿ ಆವರಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ, ಸಂಘ ಯರಗುಪ್ಪಿಯಿಂದ ಆರಂಭಗೊಂಡ ಉದ್ದು, ಹೆಸರು, ಸೋಯಾಬಿನ್ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.