ಧಾರವಾಡ ಬನಶಂಕರಿ ಬಡಾವಣೆಯ ಮಾತೃ ಛಾಯಾ ಬಾಲ ಕಲ್ಯಾಣ ಸೇವಾ ಸದನದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ ಚಾಲನೆ ನೀಡಿದರು. ಗುರುವಾರ ಸಂಜೆ 6 ಗಂಟೆಗೆ ನೂತನ ಎಲ್.ಇ.ಡಿ ಮಿನಿಮಾಸ್ಟ್ ಉದ್ಘಾಟಿಸಿದರು. ಸೇವಾ ಭಾರತಿ ಟ್ರಸ್ಟ ಕಮಿಟಿ ಗೌರವ ಅಧ್ಯಕ್ಷರು ಕಮಲಾ ಜೋಶಿ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ಮುಖ್ಯಸ್ಥ ಭಾರತಿ ನಂದಕುಮಾರ, ಮಾತಾಜಿ ಹಾಗೂ ಮುದ್ದು ಮಕ್ಕಳಿದ್ದರು.