ಶಿವಮೊಗ್ಗ: ಬಂಗಾರಪ್ಪ ಬಡಾವಣೆಯ ವಿವಾದಿತ ಸ್ಥಳದಲ್ಲಿ ದೇವಾಲಯ ನಿರ್ಮಾಣ
ಶಿವಮೊಗ್ಗದ ರಾಗಿ ಗುಡ್ಡದ ಬಂಗಾರಪ್ಪ ಬಡಾವಣೆಯ ವಿವಾದಿತ ಸ್ಥಳದಲ್ಲಿ ಗಣಪತಿ ದೇವಾಲಯವನ್ನು ನಿರ್ಮಿಸಲಾಗಿದ. ಬಂಗಾರಪ್ಪ ಬಡಾವಣೆಯಲ್ಲಿದ್ದ ನಾಗರ ಕಟ್ಟೆಯ ನಾಗರ ಕಲ್ಲನ್ನ ದುಷ್ಕರ್ಮಿಯೊಬ್ಬ ಕಾಲಿನಲ್ಲಿ ಒದ್ದು ವಿರೂಪಗೊಳಿಸಿದ್ದ. ಈ ವಿಷಯ ಚರ್ಚೆಗೂ ಕೂಡ ಕಾರಣವಾಗಿತ್ತು. ಇದಾದ ಬಳಿಕ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳು ಹಿಂದೂ ಮುಖಂಡರ ನೆರವಿನೊಂದಿಗೆ ವಿಜಯ ಗಣಪತಿ ದೇವಾಲಯವನ್ನು ನಿರ್ಮಿಸಲಾಗಿದ್ದು, ಸೋಮವಾರ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.