ಕನ್ನಡಕ ನೀರಾವರಿ ನಿಗಮಕ್ಕೆ ಸೇರಿದ ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಕಳೆದ ಐದು ತಿಂಗಳಿಂದ ವೇತನ ಪಾವತಿಸದೇ ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ ಕೇಂದ್ರ ಸಮಿತಿಯವರು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿದ ನಂತರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ ಮಾತನಾಡಿ, ಯರಮರಸ್ ವೃತ್ತದ ಯರಮರಸ್, ಕಲ್ಲೂರು, RDS, ಸಿರವಾರ, ಮಾನ್ವಿ, ಕೊಟ್ನೆಕಲ್, ಕವಿತಾಳ, ಮಸ್ಕಿ, ಸಿಂಧನೂರು, ಜವಳಗೇರಾ, ತುರವಿಹಾಳ ಸೇರಿದಂತೆ ಎಲ್ಲಾ ಉಪವಿಭಾಗಗಳಲ್ಲಿ ಕಾಲುವೆ ಮತ್ತು ಕಚೇರಿಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ ಐದು ತಿಂಗಳಿಂದ ವೇತನ ಪಾವತಿಸದೇ ತಡೆದು ಹಾಕಿರುವುದು ಗಂಭೀರ ಅನ್ಯ