ನವಲಗುಂದ: ನವಲಗುಂದದಲ್ಲಿ ಶಾಸಕರಾದ ಎನ್. ಎಚ್. ಕೋನರಡ್ಡಿ ಅವರ ಪುತ್ರರಾದ ನವೀನ್ ಕುಮಾರ್ ಅವರ ವಿವಾಹ ಕಾರ್ಯಕ್ರಮ ಹಿನ್ನೆಲೆ ಕೋನರಡ್ಡಿ ಅವರು ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿರಿಸಿ ಸರ್ವಧರ್ಮಗಳ ೭೫ ಜೋಡಿಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಭ ಕೋರಿದರು. ಈ ವೇಳೆ ಸಚಿವರುಗಳು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ಮುಖಂಡರುಗಳು, ಕೋನರಡ್ಡಿ ಕುಟುಂಬಸ್ಥರು, ಸಾವಿರಾರು ಜನರು ಸೇರಿದಂತೆ ಮೊದಲಾದವರು ಇದ್ದರು.