ಶನಿವಾರ ರಾತ್ರಿ ಸಮಯದಲ್ಲಿ ಬೆಳಗಾವಿ ನಗರದ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಶಹಾಪೂರ ಹೊಸುರ ಬಸವಣ ಗಲ್ಲಿ ಹಳೆ ಪಿಬಿ ರಸ್ತೆ ಕ್ರಾಸ್ ಹತ್ತಿರ, ಪ್ರಸಾದ ಚಂದ್ರಶೇಖರ ಜಾಧವ ಹೊಸುರ ಬಸವಣ ಗಲ್ಲಿ ನಿವಾಸಿ ಬೆಳಗಾವಿ ಹಾಲಿ-ಕಲೇಶ್ವರ ಮಂದಿರ ಹತ್ತಿರ ಜುನ್ನೆ ಬೆಳಗಾವಿ ಈತನೊಂದಿಗೆ ಹಣಕಾಸಿನ ವ್ಯವಹಾರದ ವಿಷಯವಾಗಿ ಆರೋಪಿತನು ಮಾರಕಾಸ್ತದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಕುರಿತು ದೂರು ದಾಖಲಾದ ಹಿನ್ನಲೆ ಶಹಾಪೂರ ಪೊಲೀಸ್ ಠಾಣೆ ಪೊಲೀಸರು ಆರೋಪಿ ಬಂಧಿಸುವಲ್ಲಿ ಇಂದು ರವಿವಾರ 4 ಗಂಟೆಗೆ ಯಶಸ್ವಿಯಾಗಿದ್ದಾರೆ.