ಬಳ್ಳಾರಿ: ವಾಲ್ಮೀಕಿ ಸಮಾಜದ ಮುಖಂಡರ ಹಾಗೂ ಮಾಜಿ ನಗರಸಭೆ ಸದಸ್ಯ ರಾಮಾಂಜನೀಯ್ಯನಿಧನ
ಅಂತಿಮ ದರ್ಶನ ಪಡೆದ ವಾಲ್ಮೀಕಿ ಪ್ರಸನ್ನ ನಂದಾ ಸ್ವಾಮೀಜಿಗಳು
ಬಳ್ಳಾರಿ ಜಿಲ್ಲೆಯ ವಾಲ್ಮೀಕಿ ಸಮಾಜದಮುಖಂಡರ ಹಾಗೂ ಮಾಜಿ ನಗರಸಭೆ ಸದಸ್ಯ ರಾಮಾಂಜನೀಯ್ಯ ನಿಧನ ನಿಧನದ ಹಿನ್ನೆಲೆಯಲ್ಲಿ, ಮಂಗಳವಾರ 11ಗಂಟೆಗೆ ವಾಲ್ಮೀಕಿ ಪ್ರಸನ್ನ ನಂದಾ ಸ್ವಾಮೀಜಿಗಳು ಮೃತರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಳೆದುಕೊಂಡಿರುವ ಅವರ ಕುಟಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದುಪ್ರಾರ್ಥಿಸಿದರು. ಈ ವೇಳೆ ಸ್ಥಳೀಯ ಮುಖಂಡರು, ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಕುಟುಂಬದವರು ಉಪಸ್ಥಿತರಿದ್ದರು.