ತೀರ್ಥಹಳ್ಳಿಯ ಇತಿಹಾಸ ಪ್ರಸಿದ್ಧ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀರಾಮೇಶ್ವರ ದೇವರ ತೆಪ್ಪೋತ್ಸವದ ನೆರವೇರಿಸುವ ಮೂಲಕ ವಿಜೃಂಭಣೆಯ ತೆರೆ ಕಂಡಿದೆ. ಭಾನುವಾರ ರಾತ್ರಿ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ರಾಮೇಶ್ವರ ದೇವರ ತೆಪ್ಪೋತ್ಸವ ಸಂಭ್ರಮ ಸಡಗರ ಹಾಗೂ ಅದ್ದೂರಿಯಾಗಿ ನೆರವೇರಿತು. ತೆಪ್ಪೋತ್ಸವದ ಹಿನ್ನೆಲೆ ಸಿಡಿ ಮದ್ದುಗಳನ್ನ ಸಿಡಿಸಲಾಯಿತು.