ಮಳವಳ್ಳಿ ; ಮಳವಳ್ಳಿ ಪಟ್ಟಣದ ಚೆಸ್ಕಾಂ ಆವರಣದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಶನಿವಾರ ಬೆಳಗ್ಗೆ 10 30 ರ ಸಮಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚೆಸ್ಕಾಂನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಲಾಯಿತು ನಂತರ ಮಾತನಾಡಿದ ಚೆಸ್ಕಾಂನ ಕಾರ್ಯಪಾಲಕ ಅಭಿಯಂತರರಾದ ಟಿ ಪುಟ್ಟಸ್ವಾಮಿ ಅವರು ಸಮಾಜ ಸುಧಾರಕರಾಗಿ ಸಂತರಾಗಿ ದಾಸ ಶ್ರೇಷ್ಠರಾಗಿ ತಮ್ಮ ವಚನ ಸಾಹಿತ್ಯದ ಮೂಲಕ 15ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿದ ಕನಕದಾಸರು ಸಮಾಜ ಸುಧಾರಣೆಯ ಮಹಾನ್ ಸುಧಾರಕರು ಎಂದು ಬಣ್ಣಿಸಿದರು.