ಅಂಗವಿಕಲತೆ ಶಾಪವಲ್ಲ : ಅದು ದೇವರು ಕೊಟ್ಟ ವರವೆಂದು ಭಾವಿಸಿ ಮುನ್ನಡೆಯಬೇಕು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಶೇಷಚೇತನ ಪ್ರತಿಭೆ ಡಾ. ಕೆ. ಎಸ್. ರಾಜಣ್ಣ ಅವರು ತಿಳಿಸಿದರು. ಕೆ. ಆರ್. ಪೇಟೆ ಪಟ್ಟಣದ ಮಾತೃಭೂಮಿ ಉಚಿತ ವೃದ್ದಾಶ್ರಮದಲ್ಲಿ ಅಂತರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಜರುಗಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಶೇಷಚೇತನ ಪ್ರತಿಭೆ ಡಾ. ಕೆ. ಎಸ್. ರಾಜಣ್ಣ ಅವರು ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಎಸ್. ರಾಜಣ್ಣ ಮಾತನಾಡಿದ ಅವರು, ಅಂಗವಿಕಲತೆಯು ಶಾಪವಲ್ಲ, ಅದು ದೇವರು ಕೊಟ್ಟ ವರವಾಗಿದೆ. ವಿಶೇಷಚೇತನರಿಗೆ ಸಮಾಜದಲ್ಲಿ ಅನುಕಂಪದ ಬದ