ಸಿದ್ಧಾಪುರ: ಮತ್ತಿಘಟ್ಟಾ ಜಲಾಪಾತದಲ್ಲಿ ಬಿದ್ದು ಬನವಾಸಿ ಹೋಬಳಿ ವ್ಯಾಪ್ತಿಯ ಉಂಚಳ್ಳಿ ಗ್ರಾಮ ಯುವಕ ಮನೆಗೆ ಶಾಸಕ ಶಿವರಾಮ್ ಹೆಬ್ಬಾರ ಭೇಟಿ
ಮತ್ತಿಘಟ್ಟಾ ಜಲಾಪಾತದಲ್ಲಿ ಬಿದ್ದು ಬನವಾಸಿ ಹೋಬಳಿ ವ್ಯಾಪ್ತಿಯ ಉಂಚಳ್ಳಿ ಗ್ರಾಮ ಯುವಕ ಮನೆಗೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ ಅವರು ಮಂಗಳವಾರ ಸಂಜೆ 5ಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮತ್ತಿಘಟ್ಟಾ ಜಲಪಾತದಲ್ಲಿ ಬಿದ್ದು ಯುವಕ ಪವನ ಗಣಪತಿ ಜೋಗಿ ಮೃತಪಟ್ಟ ಅಹಿತಕರ ಘಟನೆ ಸಂಭವಿಸಿತ್ತು. ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಮೃತ ಯುವಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬನವಾಸಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸಿ.ಎಫ್.ನಾಯ್ಕ, ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಗಣಪತಿ ನಾಯ್ಕ ಇದ್ದರು.