ಕಲಬುರಗಿ : ಕಲಬುರಗಿ ನಗರದ ಜೆ.ಆರ್ ನಗರ ಬಡಾವಣೆಯಲ್ಲಿ ಮನೆಯೊಂದೊಕ್ಕೆ ಕನ್ನ ಹಾಕಿರೋ ಖದೀಮರು, ಮನೆ ಬೀಗ ಮುರಿದು ₹2.40 ಲಕ್ಷ ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದ್ದು, ಜನವರಿ 13 ರಂದು ರಾತ್ರಿ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ. ನಾಗರಾಜ್ ಎಂಬುವರು ಮನೆಗೆ ಬೀಗ ಹಾಕಿ ಹೊರಗಡೆ ಹೋಗಿದ್ದರು. ಮರಳಿ ವಾಪಾಸು ಬರೋದ್ರೊಳಗೆ ಬೀರುವಿನಲ್ಲಿಟ್ಟಿದ್ದ ₹2.40 ಲಕ್ಷ ಹಣ ದೋಚಿಕೊಂಡು ಹೋಗಲಾಗಿದೆ. ಈ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ