ಗೃಹ ಸಚಿವ ಪರಮೇಶ್ವರ್ ಅವರು ವರ್ಷಾಚರಣೆ ವೇಳೆ ಅತಿಯಾಗಿ ಕುಡಿದವರನ್ನು ಮನೆಗೆ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ತುಂಬಾ ಕುಡಿದು ನಡೆಯಲು ಆಗದವರನ್ನು ವಿಶ್ರಾಂತಿ ಸ್ಥಳಗಳಿಗೆ ಕರೆದೊಯ್ಯಲಾಗುವುದು. ಪ್ರಜ್ಞೆ ಕಳೆದುಕೊಂಡವರನ್ನು 15 ವಿಶ್ರಾಂತಿ ಸ್ಥಳಗಳಲ್ಲಿ ಇಟ್ಟು, ನಶೆ ಇಳಿದ ನಂತರ ಕಳುಹಿಸಲಾಗುವುದು. ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳಲ್ಲಿ ಎಂದಿನಂತೆ ಕ್ರಮ ಕೈಗೊಳ್ಳಲಾಗುವುದು. 160 ಸ್ಥಳಗಳನ್ನು ಗುರುತಿಸಲಾಗಿದೆ. ಮಿತಿ ಮೀರಿ ಕುಡಿದು ವಾಹನ ಚಲಾಯಿಸುವುದು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.