ಬೀಳಗಿ: ಕನ್ಹೇರಿ ಶ್ರೀಗಳಿಗೆ ಜಿಲ್ಲೆಗೆ ನಿರ್ಬಂಧ ಹಿನ್ನೆಲೆ, ಬೆಳ್ಳಂ ಬೆಳಿಗ್ಗೆ ಚಿಕ್ಕಾಲಗುಂಡಿ ಮಠದಿಂದ ನಿರ್ಗಮಿಸಿದ ಶ್ರೀಗಳು
Bilgi, Bagalkot | Oct 18, 2025 ಮಹಾರಾಷ್ಟ್ರದಲ್ಲಿ ಲಿಂಗಾಯತ ಶ್ರೀಗಳ ಬಗ್ಗೆ ಅವಹೇಳನಕಾರಿ ಭಾಷಣ ಹಿನ್ನೆಲೆ. ಬಾಗಲಕೋಟೆ ಜಿಲ್ಲೆ ತೊರೆಯುವಂತೆ ಕನ್ಹೇರಿ ಶ್ರೀಗಳಿಗೆ ನಿನ್ನೆ ನೊಟೀಸ್. ಇಂದು ಬೆಳ್ಳಂಬೆಳಿಗ್ಗೆ ೫.೪೫ ವೇಳೆ ಹೊರಟ ಸ್ವಾಮೀಜಿ. ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ಹೇರಿಗೆ ಹೋದ ಸ್ವಾಮೀಜಿ. ಚಿಕ್ಕಾಲಗುಂಡಿ ಗ್ರಾಮದ ತಮ್ಮ ಶಾಖಾಮಠ. ಮಲ್ಲಿಕಾರ್ಜುನ ಮಠದಲ್ಲಿ ಎರಡು ದಿನದಿಂದ ಇದ್ದ ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿ. ಬಾಗಲಕೋಟೆ ಡಿಸಿ ಅವರಿಂದ ನಿನ್ನೆ ನೊಟೀಸ್ ಜಾರಿ. ಬೀಳಗಿ ತಹಸೀಲ್ದಾರ ವಿನೋದ ಅವರಿಂದ ನೊಟೀಸ್ ವಿತರಣೆಯಾಗಿತ್ತು.