ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮದುವೆ ಮೆರವಣಿಗೆಯ ವೇಳೆ ಉಂಟಾದ ಡಿಜೆ ವಿವಾದ ದೊಡ್ಡ ಗಲಭೆಗೆ ತಿರುಗಿ, ಎರಡು ಕುಟುಂಬಗಳ ನಡುವೆ ಮಾರಾಮಾರಿಗೆ ಕಾರಣವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುರುವಾರ 10 ಗಂಟೆಗೆ ನಡದಿದೆ ಎನ್ನಲಾದ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಜೆ ಸದ್ದು ಅಧಿಕವಾಗಿದೆ ಎಂಬ ಕಾರಣಕ್ಕೆ ಕೆಲವು ಸ್ಥಳೀಯರು ಡಿಜೆ ಬಂದ್ ಮಾಡಿರಿ ಎಂದು ವಾಗ್ವಾದಮಾಡಿದ್ದರು. ಇದೇ ವೈಶಮ್ಯದ ಹಿನ್ನಲೆ ಮಾರೆಪ್ಪ ಮನೆಗೆ ನುಗ್ಗಿ, ಕಾವಲಿ ಈರಣ್ಣ ಹಾಗೂ ಕುಟುಂಬ ಸದಸ್ಯರು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾನ್ವಿ ಪಟ್ಟಣದಲ್ಲಿ ಮದುವೆಯ ಸಂಭ್ರಮ ಮಧ್ಯೆ ಉಂಟಾದ ಈ ಸಣ್ಣ ವಿವಾದ ದೊಡ್ಡ ಗಲಭೆಗೆ ತಿರುಗಿರುವುದು ಸ್ಥಳೀಯರಲ್ಲಿ ಆತಂಕಕ್