21ನೇ ಶತಮಾನದಲ್ಲಿ ಬದುಕುತ್ತಿದ್ದರೂ ದಲಿತ ಸಮುದಾಯಕ್ಕೆ ಶವ ಹೂಳಲು ಒಂದು ಸ್ಥಳ ಇಲ್ಲವೆಂದರೆ ನಾಚಿಕೆಗಡನ ವಿಷಯ. ಈಗಾಗಲೇ ಅಧಿಕಾರಿಗಳಿಗೆ ಸಾಕಷ್ಟು ರೀತಿಯಲ್ಲಿ ಮನವಿ ಮಾಡಿಕೊಂಡಿದ್ದೇವೆ. ಮಲ್ಲಟ ಗ್ರಾಮದ ಸರ್ವೆ ನಂಬರ್ 228 ರಲ್ಲಿ 100 ಎಕರೆ ಸರ್ಕಾರಿ ಜಾಗವಿದೆ, ಅಲ್ಲಿ ದಲಿತರಿಗೆ ಶವ ಹೋಳಲು ಮತ್ತು ನಿವೇಶನ ಹಕ್ಕುಪತ್ರ ನೀಡಬೇಕು ಎಂದು ಗ್ರಾಮದ ಮುಖಂಡ ವೆಂಕೋಬ ಒತ್ತಾಯಿಸಿದ್ದಾರೆ. ಈಗಾಗಲೇ ಈ ಒಂದು ವಿಚಾರವನ್ನು ಜಿಲ್ಲಾಡಳಿತ, ತಾಲೂಕು ಆಡಳಿತದ ಗಮನಕ್ಕೆ ತಂದಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತತ್ತಾಯಿಸಿದರು.