ಗೌರಿ ಹುಣ್ಣಿಮೆ ಪ್ರಯುಕ್ತ ಧಾರವಾಡ ಬಾಳಿಕಾಯಿ ಓಣಿಯಲ್ಲಿನ ಶ್ರೀ ನಾಮದೇವ ಹರಿ ಮಂದಿರದಲ್ಲಿ ಗುರುವಾರ ರುಕ್ಮಿಣಿ ಮಹಿಳಾ ಮಂಡಳಿಯ ಸದಸ್ಯರು ಕಾರ್ತಿಕೋತ್ಸವ ನೇರವೇರಿಸಿದರು. ಭಯ ಭಕ್ತಿ ಭಾವದಿಂದ ರುಕ್ಮಿಣಿ ಮಹಿಳಾ ಮಂಡಳಿಯ ಸದಸ್ಯರು ಶ್ರೀ ಹರಿ ವಿಠ್ಠಲನ ರಂಗವಲ್ಲಿ ಬಿಡಿಸಿ ದೀಪಗಳನ್ನು ಹಚ್ಚಿ ಸಂಭ್ರಮಿಸಿದರು.