ಕಲಬುರಗಿ : ಎಪಿಎಂಸಿ ವ್ಯಾಪ್ತಿಯಲ್ಲಿ ಲೈಸೆನ್ಸ್ ಇಲ್ಲದೇ ಹತ್ತಿ ಬೀಜ ಮಾರಾಟ ಕೇಂದ್ರಗಳನ್ನ ಪ್ರಾರಂಭಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಯುವ ರೈತ ಮುಖಂಡ ಸಿದ್ದು ಎಸ್ ಎಲ್ ಆಗ್ರಹಿಸಿದ್ದಾರೆ.. ಡಿಸೆಂಬರ್ 17 ರಂದು ಬೆಳಗ್ಗೆ 11.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವೆಡೆ ಕಳಪೆ ಹತ್ತಿ ಬೀಜ ವಿತರಣೆ ಮಾಡಲಾಗುತ್ತಿದೆಯೆಂಬ ದೂರುಗಳು ರೈತರಿಂದ ಕೇಳಿಬಂದಿದ್ದು, ಅಂತಹ ಅಂಗಡಿಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಿಮಿನಲ್ ಮೊಕ್ಕದ್ದಮ್ಮೆ ದಾಖಲಿಸಬೇಕೆಂದು ಸಿದ್ದು ಆಗ್ರಹಿಸಿದ್ದಾರೆ