ಕರ್ನಾಟಕ ಸರ್ಕಾರ ಸ್ವಾಮ್ಯಕ್ಕೆ ಒಳಪಟ್ಟ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಒಳಪಟ್ಟ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಬಾಣಸಮುದ್ರ ಗ್ರಾಮದಲ್ಲಿ ವಿದ್ಯುಕ್ತವಾಗಿ ಮಾದರಿ ಗ್ರಾಮ ಮಾಡುವ ಉದ್ದೇಶದಿಂದ 50 ಲಕ್ಷ ಕಾಮಗಾರಿಗೆ ಶಾಸಕ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಚಾಲನೆ ನೀಡಿದರು. ನಂತರ ಪಿ.ಎಂ. ನರೇಂದ್ರಸ್ವಾಮಿ ಅವರು ಮಾತನಾಡಿ, ಹಲವಾರು ಗ್ರಾಮಗಳನ್ನು ವಿದ್ಯುಕ್ತವಾಗಿ ಮಾದರಿ ಗ್ರಾಮಗಳಾಗಿ ಮಾಡಲು ಆಯ್ಕೆ ಮಾಡಲಾಗಿದೆ. ಅದರಲ್ಲಿ ಬಾಣಸಮುದ್ರವೂ ಒಂದು. ಮೊದಲು ಎಲ್ಲಾದರೂ ವಿದ್ಯುತ್ ತಂತಿಗಳ ಸಮಸ್ಯೆ ಇದ್ದರೆ ಅದನ್ನು ಹೊಸದಾಗಿ ಹಾಕುವುದು, ವಿದ್ಯುತ್ ಕಂಬಗಳ ಅವಶ್ಯಕತೆ ಇದ್ದರೆ ಮಧ್ಯದಲ್ಲಿ ಹಾಕುವುದು, ಮೊದಲು ಗ್ರಾಮಕ್ಕೆ ಒಂದೇ ಟ್ರಾನ್ಸ್ ಫಾರ್ಮರ್ ಇ