ಉತ್ತಮ ಆದಾಯ ಹಾಗೂ ಆರೋಗ್ಯಕ್ಕಾಗಿ ನೈಸರ್ಗಿಕ ಕೃಷಿ ಬೇಸಾಯ ಸೂಕ್ತ ಎಂದು ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾಕ್ಟರ್ ರಾಜಕುಮಾರ್ ಅವರು ಸಲಹೆ ನೀಡಿದರು. ತಾಲೂಕಿನ ಹಿಲಾಲಪುರ ಗ್ರಾಮದ ಜಗನ್ನಾಥರೆಡ್ಡಿ ತಿರ್ಲಾಪುರೆ ಅವರ ತೋಟದಲ್ಲಿ ಜಿಲ್ಲಾ ಪಂಚಾಯತ್ ಬೀದರ್ ಕೆ ವಿ ಕೆ ಬೀದರ್ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಧ್ಯಾಹ್ನ 3:30ಕ್ಕೆ ಏರ್ಪಡಿಸಿದ್ದ ನೈಸರ್ಗಿಕ ಕೃಷಿ ಬೇಸಾಯ ಕುರಿತ ತರಬೇತಿ ಉದ್ದೇಶಿಸಿ ಮಾತನಾಡಿದರು.