ಅಕ್ರಮ ಮರಳು ಸಾಗಾಣಿಕೆಗೆ ವೇಳೆ ದಾಳಿ ನಡೆಸಿ ಟ್ರ್ಯಾಕ್ಟರ್ವೊಂದನ್ನು ಮರಳಿನೊಂದಿಗೆ ದೇವದುರ್ಗ ಪೊಲೀಸ್ ಸಿಬ್ಬಂದಿಗಳು ಜಪ್ತಿ ಮಾಡಿದ ಘಟನೆ ಪರತಾಪೂರ ಗ್ರಾಮದ ಬಳಿ ಜರುಗಿದೆ. ಶುಕ್ರವಾರ ಮದ್ಯಾನ 3 ಗಂಟೆ ಸುಮಾರಿಗೆ ಪೊಲೀಸರು ಪರತಾಪೂರ ಗ್ರಾಮದ ಕೃಷ್ಣಾನದಿ ತೀರದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತೆಗೆದು ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಖಾಸಗಿ ವಾಹನದಲ್ಲಿ ಸ್ಥಳಕ್ಕೆ ತೆರಳಿ, ಟ್ರ್ಯಾಕ್ಟರ್ನ್ನು ತಡೆದು ಪರಿಶೀಲನೆ ನಡೆಸಿದರು. ಟ್ರ್ಯಾಕ್ಟರ್ನಲ್ಲಿ ಮರಳು ತುಂಬಲಾಗಿದ್ದು, ಮರಳು ಹಾಗೂ ಟ್ರ್ಯಾಕ್ಟರ್–ಟ್ರಾಲಿ ಸಮೇತ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.