ಚಿತ್ರದುರ್ಗ, ನವೆಂಬರ್.09 : ದುರ್ಗದ ದೊರೆ ಹಿರೆಮದಕರಿನಾಯಕರ ಧರ್ಮಪತ್ನಿ ಗಂಡೋಬಳವ್ವ ನಾಗತಿ ಎರಡು ವರ್ಷಗಳ ಕಾಲ ಚಿತ್ರದುರ್ಗದ ಕೋಟೆಯನ್ನು ಆಳಿದ್ದಾಳಾದರೂ ಈಕೆ ಯಾರೆಂಬುದು ಇನ್ನು ಬೆಳಕಿಗೆ ಬರದಿರುವುದು ನೋವಿನ ಸಂಗತಿ ಎಂದು ಖ್ಯಾತ ಕಾದಂಬರಿಕಾರ ಡಾ.ಬಿ.ಎಲ್.ವೇಣು ವಿಷಾಧಿಸಿದರು. ಚಿತ್ರದುರ್ಗ ಇತಿಹಾಸ ಕೂಟದ ಸದಸ್ಯ ಕುಮಾರ್ ಬಡಪ್ಪ ಚಿತ್ರಕಾರ ಸುಲ್ತಾನ್ರವರಿಂದ ಬರೆಸಿರುವ ಗಂಡೋಬಳವ್ವನಾಗತಿಯ ಭಾವಚಿತ್ರವನ್ನು ತಮ್ಮ ನಿವಾಸದಲ್ಲಿ ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.