ಭಾಲ್ಕಿ: ಗೆಳೆಯರೊಂದಿಗೆ ನದಿ ನೀರಿನಲ್ಲಿ ಈಜಲು ಹೋಗಿ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹಲಸಿತೂಗಾಂವ ಗ್ರಾಮದ ಬಳಿ ಜರುಗಿದೆ. ಹಲಸಿತೂಗಾಂವ ಗ್ರಾಮದ ನಿವಾಸಿ ದಿಗಂಬರ ಬಾಲಾಜಿ ಸೂರ್ಯವಂಶಿ (21) ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕನಾಗಿದ್ದಾನೆ. ಕಳೆದ ಭಾನುವಾರ ತನ್ನ ಗೆಳೆಯರೊಂದಿಗೆ ಹಲಸಿತೂಗಾಂವ ಗ್ರಾಮದ ಬಳಿಯ ಮಾಂಜ್ರಾನದಿ ನೀರಿನಲ್ಲಿ ಈಜಾಡಲು ಎಂದು ತೆರಳದ ಈತ ಈಜು ಬಾರದೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ, ಈತನ ಶವ ಪತ್ತೆಗಾಗಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದರು, ಆದರೆ ಇಂದು ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ವಾಂಜರಖೇಡ್ ಗ್ರಾಮದ ಬಳಿಯ ಮಾಂಜ್ರಾ ನದಿ ನೀರಿನಲ್ಲಿ ಈತ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮೇಹಕರ್ ಪ