ಧಾರವಾಡ ನಗರದ ಆಲೂರ ವೆಂಕಟರಾವ ಸಭಾಂಗಣದಲ್ಲಿ ಭಾನುವಾರ ಪಂ.ಬಸವರಾಜ ರಾಜಗುರು ಸ್ಮರಣೆಯಲ್ಲಿ ವಚನ ಸಂಗೀತೋತ್ಸವ ನಡೆಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಚಿಂತಕ ಡಾ.ವೀರಣ್ಣ ರಾಜೂರ ಮಾತನಾಡಿ, ವಚನ ಸಂಗೀತ ಬೆಳೆಸುವಲ್ಲಿ ರಾಜಗುರು ಅವರ ಪಾತ್ರ ಮಹತ್ವದ್ದು. ಗಾಯನದ ಮೂಲಕ ವಚನಗಳನ್ನು ಜನರ ಮನಸಿಗೆ ಮುಟ್ಟಿಸಿದರು ಎಂದರು. ವಿಶೇಷ ಆಹ್ವಾನಿತರಾಗಿ ರಂಜಾನ ದರ್ಗಾ ಆಗಮಿಸಿದ್ದರು. ಕೈವಲ್ಯಕುಮಾರ ಗುರವ, ಕುಮಾರ ಬೆಕ್ಕೇರಿ ಇದ್ದರು.