ಟಿಪ್ಪು ಸುಲ್ತಾನ್ ಇತಿಹಾಸದಿಂದ ಟಿಪ್ಪು ಸುಲ್ತಾನ್ ಹೋರಾಟ, ಸಾಧನೆ, ವ್ಯಕ್ತಿತ್ವ ಗೋತ್ತಾಗುತ್ತದೆ ಎಂದು ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸ್ಮಾರಕ ಟ್ರಸ್ಟ್ ಅಧ್ಯಕ್ಷ ರಂಜಾನ್ ದರ್ಗಾ ಹೇಳಿದರು. ನಗರದ ಅಂಜುಮನ್ ಸಂಸ್ಥೆ ಸಭಾಂಗಣದಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಕುರಿತು ಅಪಪ್ರಚಾರ ನಡೆದಿದೆ. ನೈಜ ಇತಿಹಾಸ ಓದಿದರೆ ಮಾತ್ರ ವಸ್ತು ಸ್ಥಿತಿ ಗೊತ್ತಾಗಲು ಸಾಧ್ಯ ಎಂದರು.