ಭ್ರಷ್ಟ ಅಧಿಕಾರಿ ಮನೆ ಮೇಲೆ ದಾಳಿ. ಅಪಾರ ಸಂಪತ್ತು ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಪಿಆರ್ಇಡಿ ಸೂಪರಿಡೆಂಟ್ ಭೈರೇಶ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಆದಾಯಕ್ಕಿಂತ 1.92 ಕೋಟಿ ರೂಪಾಯಿ ಹೆಚ್ಚು ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ಒಂದು ಸೈಟ್, ಮಂಡ್ಯದಲ್ಲಿ ಎರಡು ಸೈಟ್ ಸೇರಿದಂತೆ ಒಟ್ಟು ನಾಲ್ಕು ಸೈಟ್ಗಳನ್ನು ಭೈರೇಶ್ ಹೊಂದಿದ್ದಾರೆ. ಮೈಸೂರಿನ ಸೈಟ್ ದಾಖಲಾತಿ ಪಿಡಿಓ ಮಂಜುನಾಥ್ ಅವರ ಮನೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ಭೈರೇಶ್ ಹೆಸರಿನಲ್ಲಿ 1.37 ಎಕರೆ ಜಮೀನು ಮತ್ತು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿರುವ ಘಟನೆ ಬುಧವಾರ ಸಂಜೆ 4 ಗಂಟೆಯಲ್ಲಿ ಪಬ್ಲಿಕ್ ಹ್ಯಾಪ್ಗೆ ಲಭ್ಯವಾಗಿದೆ.