ಯಲ್ಲಾಪುರ: ಗ್ರಾಮ ಪಂಚಾಯತ್ ಗಳಿಗೆ ಆಡಳಿತಧಿಕಾರಿ ನೇಮಕ ಮಾಡದಂತೆ ಹಾಗೂ ಜನಪ್ರತಿನಿಧಿಗಳ ಅವಧಿ ವಿಸ್ತರಿಸುವಂತೆ ಸರಕಾರ ಕ್ಕೆ ವಿಕೇಂದ್ರಿಕರಣ ಯೋಜನೆ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಸಮಿತಿ ಮಾಜಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಆಗ್ರಹಿಸಿದರು.ಅವರು ಸೋಮವಾರ ಮಾಧ್ಯಮ ದವರೊಂದಿಗೆ ಮಾತನಾಡಿ.6000ಪಂಚಾಯತ್ ಗಳಿಗೆ 9000 ಜನ ಪ್ರತಿನಿಧಿಗಳಿ ರುವ ಗ್ರಾಮ ಪಂಚಾಯತಗಳಿಗೆ ಅಧಿಕಾರವಧಿ ಮುಗಿದಿದೆ ಎಂಬ ಕಾರಣಕ್ಕಾಗಿ ಆಡಳಿತ ಶಾಹಿ ಅಧಿಕಾರಿಗಳ ಕೈಯಲ್ಲಿ ಪ್ರಜಾಪ್ರಭುತ್ವ ವನ್ನು ಕೊಡುವಂತಹ ಕೆಟ್ಟ ಸಂಪ್ರದಾಯ ಇಂದಿನಿಂದ ಆರಂಭವಾಗಿದೆ ಇದು ಸರಿಯಲ್ಲ ಎಂದರು.