ಮೊಳಕಾಲ್ಮುರು:- ತಾಲೂಕಿನ ರೈತರ ಜೀವನಾಡಿ ಚಿನ್ನ ಹಗರಿ ಹಳ್ಳ ನೈಸರ್ಗಿಕ ಸಂಪನ್ಮೂಲ ದಿಂದ ಸಂಪತ್ಭರಿತವಾಗಿದೆ. ಕರ್ನಾಟಕದ ವೆಂಕಟಪುರ,ಉರ್ಥಾಳ್, ಮಾಚೇನಹಳ್ಳಿ ಗ್ರಾಮವನ್ನು ಬಳಸಿಕೊಂಡು ಈ ನದಿಯ ನೀರು ನೇರವಾಗಿ ಆಂಧ್ರಕ್ಕೆ ಹರಿಯುತ್ತದೆ. ಈ ನದಿಯಲ್ಲಿ ಸಿಗುವ ಶುದ್ಧ ಮರಳಿಗೆ ಕರ್ನಾಟಕ ರಾಜ್ಯದಲ್ಲಿ ತುಂಬಾ ಬೇಡಿಕೆ ಇದೆ... ಇದನ್ನೇ ಬಂಡವಾಳ ಮಾಡಿಕೊಂಡ ಹಲವಾರು ಬಂಡವಾಳ ಶಾಹಿಗಳು ದೊಡ್ಡಮಟ್ಟದ ಮರಳು ದಂಧೆ ನಡೆಸುತ್ತಿದ್ದಾರೆ.. ಇದರ ಜೊತೆಗೆ ಆಂಧ್ರದ ಮರಳುಗಳ್ಳರ ಹೊಡೆತಕ್ಕೆ ಚಿನ್ನ ಹಗರಿ ಹಳ್ಳವು ಬಾಗಶಃ ನಲಗುತ್ತಿದೆ.