ರಾಜ್ಯದಲ್ಲಿ ಸಂಗೀತ ಶಿಕ್ಷಕರನ್ನು ನೇಮಕಾತಿ ಮಾಡಬೇಕೆಂದು ರಾಯಚೂರು ಜಿಲ್ಲಾ ಕಲಾವಿದರ ಸಂಘದ ಜಂಟಿ ಕಾರ್ಯದರ್ಶಿ ನರಸಿಂಮುಲು ಆರೋಲಿ ಸರ್ಕಾರಕ್ಕೆ ಒತ್ತಾಯ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಸಂಗೀತ ಶಿಕ್ಷಕರ ನೇಮಕಾತಿ ನಡೆದಿಲ್ಲ. 2010ರಲ್ಲಿ ಕೊನೆಯ ಬಾರಿಗೆ ನೇಮಕಾತಿ ನಡೆದಿದ್ದು. ಅದಾದ ನಂತರ ಅನೇಕ ಸಂಗೀತ ಪದವಿಧರರು ನಿರುದ್ಯೋಗಿಗಳಾಗಿ ಮನೆಯಲ್ಲಿ ಕುಳಿತಿದ್ದಾರೆ. ಸರ್ಕಾರದ ವಿವಿಧ ಶಾಲೆಗಳಲ್ಲಿ ಸಂಕೇತ ಶಿಕ್ಷಕರ ಬಗ್ಗೆ ಖಾಲಿ ಇದ್ದರೂ ಅಭ್ಯರ್ಥಿ ಮಾಡುತ್ತಿಲ್ಲ ಕೂಡಲೇ ಕ್ರಮ ವಹಿಸಬೇಕು ಎಂದು ಪತ್ರಿಕಾಗೋಷ್ಠಿ ಮುಖಾಂತರ ಒತ್ತಾಯಿಸಿದರು.