ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾವುದೋ ಒಂದು ಪಕ್ಷವನ್ನು ಅವಲಂಬಿಸಿಲ್ಲ ಎಂದು ಸಂಘದ ಪ್ರಚಾರಕ ರವೀಂದ್ರ.ಜಿ ತಿಳಿಸಿದರು. ಧಾರವಾಡ ತಾಲೂಕಿನ ಗರಗ ಗ್ರಾಮದ ಆಚಾರ್ಯ ಜಯತೀರ್ಥ ದಿಗಂಬರ ಜೈನ ಶಾಲೆಯ ಆವರಣದಲ್ಲಿ ನಡೆದ ಬಹಿರಂಗ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರ ಕಟ್ಟುವ, ಶಿಸ್ತು, ಸಂಸ್ಕಾರ, ಸಮರ್ಪಣಾ ಭಾವವನ್ನು ಜನರಲ್ಲಿ ಮೂಡಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದೂಗಳ ಒಗ್ಗಟ್ಟು ಏಕತೆ ಬಿಂಬಿಸುತ್ತಿದೆ.