ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಇಂದು ಸೋಮವಾರ 3 ಗಂಟೆಗೆ ಅದ್ದೂರಿ ಕನಕದಾಸರ ಜಯಂತಿ ನಿಮಿತ್ಯವಾಗಿ ಮೆರವಣಿಗೆಗೆ ಶಾಸಕ ವಿಶ್ವಾಸ ವೈದ್ಯ ಅವರ ಪತ್ನಿ ಶೃತಿ ವಿಶ್ವಾಸ ವೈದ್ಯ ಅವರು ಚಾಲನೆ ನೀಡಿದರು ಹಾಗೇಯೆ ಮೆರವಣಿಗೆಯಲ್ಲಿ ಡೊಳ್ಳಿನ ವಾಲಗ, ಗೊಂಬೆ ಕುಣಿತ, ಕರಡಿ ಮಜಲು, ಡೊಳ್ಳಿನ ಕುಣಿತ ಸೇರಿದಂತೆ ಅನೇಕರು ಕಲಾ ತಂಡಗಳು ಭಾಗವಹಿಸಿದ್ದವು ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಶಂಕರ ಇಟ್ನಾಳ, ಮಾಜಿ ರಾಜ್ಯ ಕುರುಬ ಸಮುದಾಯ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ಡಿ ಡಿ ಟೋಪೋಜಿ, ಆರ್ ಕೆ ಪಟಾತ್, ಮಾಡಮಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಕಪ್ಪ ಸಣ್ಣಲಿಂಗನವರ, ಫಕೀರಪ್ಪ ಹದ್ದಣ್ಣವರ ಭಾಗಿ