ದಾಂಡೇಲಿ : ಆರೋಗ್ಯ ಭಾರತಿ ಸಂಸ್ಥೆ ಮತ್ತು ಜಿ.ಎಸ್.ಬಿ ಸಮಾಜದ ಆಶ್ರಯದಡಿ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಸಂಜೆ 5:30 ಗಂಟೆ ಸುಮಾರಿಗೆ ಶ್ರೀ ಧನ್ವಂತರಿ ಜಯಂತಿಯನ್ನು ಆಚರಿಸಲಾಯ್ತು. ಆರೋಗ್ಯ ಭಾರತಿ ಇದರ ಶಿರಸಿ ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ ಹೆಗಡೆ ಮತ್ತು ಸಹ ಸಂಯೋಜಕ ನಾಗೇಶ, ಪಾರಂಪರಿಕ ವೈದ್ಯರಾದ ರಾಮಚಂದ್ರ ಹೆಗಡೆ, ಮಧುಕೇಶ್ವರ ಹೆಗಡೆ ಮತ್ತು ಪ್ರಮುಖರಾದ ವಾಸುದೇವ ಪ್ರಭು ಅವರು ಭಾಗವಹಿಸಿ ಸದೃಢ ಆರೋಗ್ಯಕ್ಕೆ ಆಯುರ್ವೇದ ಪದ್ಧತಿ ಭದ್ರ ಬುನಾದಿ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸುಗಮ ಆರೋಗ್ಯದೊಂದಿಗೆ ಜೀವಿಸಲು ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಂದು ಕರೆ ನೀಡಿದರು.