ಸಾಗರ ನಗರದ ಬಿಹೆಚ್ ರಸ್ತೆಯಲ್ಲಿ ಇರುವ ಅಜಾದ್ ಮಸ್ಜಿದ್ ರಸ್ತೆಯ ಮೂಲಕ ಅಶೋಕ ರಸ್ತೆಗೆ ಬರುವ ಕ್ರಾಸಿನಲ್ಲಿ ಹಲವು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಕಾಮಗಾರಿಗಾಗಿ ತೆಗೆದಿರುವ ಬೃಹತ್ ಗಾತ್ರದ ಹೋಂಡ ಮುಚ್ಚದೆ ಹಾಗೆಯೇ ಬಿಟ್ಟಿರುವುದರಿಂದ ಈ ರಸ್ತೆಗೆ ಬರುವ ಕಾರು ಚಾಲಕರು ವಾಹನ ಚಾಲಕರು ಪಾದಚಾರಿಗಳು ತೊಂದರೆ ಪಡುವ ಸ್ಥಿತಿ ಉದ್ಭವವಾಗಿದೆ. ಅದೇರೀತಿ ಶುಕ್ರವಾರ ರಾತ್ರಿ 8 ಗಂಟೆಗೆ ಈ ರಸ್ತೆಯಲ್ಲಿ ಬರುತ್ತಿದ್ದ ಕಾರುವೊಂದ ಆಯಾ ತಪ್ಪಿ ಚರಂಡಿಗೆ ಇಳಿದಿದ್ದು ಅದೃಷ್ಟವಶಾತ್ ಸ್ಥಳೀಯರ ಹಾಗೂ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ