ಹುಬ್ಬಳ್ಳಿ: ರಸ್ತೆ ಮಧ್ಯದಲ್ಲಿ ನಾಯಿ ಅಡ್ಡ ಬಂದ ಹಿನ್ನೆಲೆ ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಕಾರಣ ಹಿಂಬದಿಯ ಸವಾರೊಬ್ಬರು ಮೃತಪಟ್ಟು, ದ್ವಿಚಕ್ರ ವಾಹನ ಚಾಲಕ ಗಾಯಗೊಂಡ ಘಟನೆ ತಾಲೂಕಿನ ನೂಲ್ವಿ ಕ್ರಾಸ್ ಬಳಿ ನಡೆದಿದೆ. ಮುಂಡಗೋಡದ ಲಕ್ಷ್ಮೀ ಗರಗದ(೬೫) ಮೃತಪಟ್ಟಿರುವ ಮಹಿಳೆ. ಬಿಂದಪ್ಪ ಗಾಯಗೊಂಡಿದ್ದಾರೆ. ಪತಿ ಬಿಂದಪ್ಪ ಅವರ ಜೊತೆ ದ್ವಿ ಚಕ್ರ ವಾಹನದಲ್ಲಿ ಹಾವೇರಿಯಿಂದ ಹುಬ್ಬಳ್ಳಿ ಕಡೆ ಹೋಗುವಾಗ ಅಪಘಾತವಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ನಗರದ ಕೆಎಂಸಿಆರ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ -ಲಿಸದೆ ಲಕ್ಷ್ಮೀ ಅವರು ಮೃತಪಟ್ಟಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.